ಕರ್ನಾಟಕ ಬಂಜಾರ (ಲಂಬಾಣಿ) ಹಕ್ಕು ಸಂರಕ್ಷಣಾ ಸಮಿತಿ ಜಾತಿ ಗಣತಿ ಖಂಡನೆ.
ಧಾರವಾಡ 03 :
ಪರಿಶಿಷ್ಟ ಜಾತಿಗಳ ಉಪವರ್ಗೀಕರಣ (ಒಳಮೀಸಲಾತಿ) ಸಮಿಕ್ಷೆಯ ಜನಜಾಗೃತಿ ಹಾಗೂ ಸಮಾಲೋಚನಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಮ್ಮದು 3600 ತಾಂಡಾಗಳಿದ್ದು ಸುಮಾರು 30 ಲಕ್ಷ ಜನಸಂಖ್ಯೆಯ ಇದ್ದು ಇಂದಿನ ಸರ್ಕಾರ 13 ಲಕ್ಷ 96 ಸಾವಿರ ರಾಜ್ಯದಲ್ಲಿದ್ದಾರೆ ಎಂದು ಹೇಳಿದ್ದು ಖಂಡನೀಯ. ಎಂದು ಕರ್ನಾಟಕ ಬಂಜಾರ (ಲಂಬಾಣಿ) ಹಕ್ಕು ಸಂರಕ್ಷಣಾ ಸಮಿತಿ
ರಾಜ್ಯಾಧ್ಯಕ್ಷರು, ಎಸ್.ಆರ್ ರಾಜಾನಾಯ್ಕ ಹೇಳಿದರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು
ಒಳಮೀಸಲಾತಿ ವಿಚಾರದಲ್ಲಿ ನ್ಯಾ. ನಾಗಮೋಹನದಾಸರವರು ಸರ್ಕಾರಕ್ಕೆ ನೀಡಿರುವ ಮಧ್ಯಂತರ ವರದಿಯಲ್ಲಿ ಸುಪ್ರೀಂ ಕೋರ್ಟಿನ ಆದೇಶದಂತೆ ಎಂಪಿರಿಕಲ್ ಡಾಟಾ (ಪ್ರಾಯೋಗಿಕ ದತ್ತಾಂಶ) ಸಂಗ್ರಹಣೆ ಮಾಡದೇ ಒಳಮೀಸಲಾತಿ ಕಲ್ಪಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ಸರ್ಕಾರವು ಪರಿಶಿಷ್ಟ ಜಾತಿಗಳಲ್ಲಿ ಬರುವ ಪ್ರತಿಯೊಂದು ಜಾತಿಯ ಸ್ಥಿತಿಗತಿ ಕುರಿತು ಅಧ್ಯಯನ ಮಾಡಲು ಅದೇಶಿಸಿದ.
ಈ ಹಿನ್ನಲೆಯಲ್ಲಿ ಆಯೋಗವು ಶಾಲಾ ಶಿಕ್ಷಕರನ್ನು ನೇಮಿಸಿಕೊಂಡು ಅವರಿಗೆ ತರಬೇತಿ ನೀಡಿ ಮೇ 5 ರಿಂದ ಮೇ 17 ರವರೆಗೆ ಸಮೀಕ್ಷೆ ಕಾರ್ಯ ನಡೆಸಲು ಮುಂದಾಗಿದೆ.
ಈ ವಿಚಾರದಲ್ಲಿ, ನಮ್ಮ ಸಂಘಟನೆಗಿರುವ ಕೆಲವು ಆತಂಕಗಳನ್ನು ತಮ್ಮ ಅವಗಾಹನೆಗೆ ಸಲ್ಲಿಸುತ್ತಿದ್ದೇವೆ ಎಂದರು.
ಆಯೋಗ ಕೈಗೊಳ್ಳುತ್ತಿರುವ ಸಮೀಕ್ಷೆಯಲ್ಲಿ ಯಾವ ಯಾವ ಅಂಶಗಳ ಕುರಿತು ಜನರು ವಿವರ ನೀಡಬೇಕೆಂಬುದು ಇದುವರೆಗೆ ಯಾರಿಗೂ ತಿಳಿದಿಲ್ಲ. ನಾವು ಪ್ರತಿನಿಧಿಸುವ ಜಾತಿಯ ಬಹುಪಾಲು ಜನರು ದಾಖಲೆ ರಹಿತ ಜನವಸತಿಗಳಲ್ಲಿ ವಾಸಿವಿರುವ ಅಮಾಯಕರು, ಅನಕ್ಷರಸ್ತರು ಮತ್ತು ಅರೆಕಾಲಿಕ ರಾಜ್ಯ ಹೊರ ಉದ್ಯೋಗಕ್ಕಾಗಿ ತಮ್ಮ ತಾಂಡಾಗಳನ್ನು ಬಿಟ್ಟು ಹೊರ ಜಿಲ್ಲೆಗಳಿಗೆ ವಲಸೆ ಹೋಗಿರುವವರಾಗಿದ್ದಾರೆ. ಆಯೋಗದ ಸಮೀಕ್ಷಾ ವೇಳಾ ಪಟ್ಟಿ ಗಮನಿಸಿದರೆ ಅವರ ಎಲ್ಲಾ ಮಾಹಿತಿ ಸಂಗ್ರಹಿಸಲು ಸಾಧ್ಯವಿಲ್ಲಾ ಎಂದರು.
ಪರಿಶಿಷ್ಟ ಜಾತಿಗಳ ಜೀವನ ವಿಧಾನ, ವಾಸಸ್ಥಾನ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ ಸ್ಥಿತಿಗತಿಗಳು ಜಾತಿ ಜಾತಿಗೆ ವಿಭಿನ್ನವಾಗಿರುತ್ತವೆ. ಅವುಗಳ ವಾಸ್ತವಾಂಶವನ್ನು ತಿಳಿಯಲು ನಡೆಸಲುದ್ದೇಶಿಸಿದ ಸಮೀಕ್ಷೆಯ ನಮೂನೆಯಲ್ಲಿ ಆ ಮಾಹಿತಿಗಳು ಸಂಗ್ರಹಣೆಯಾಗುವಂತೆ ಮಾಡಲು ಅವಶ್ಯವಿರುವ ಎಲ್ಲಾ ಅಂಶಗಳು ಒಳಗೊಂಡಿರಬೇಕಾಗುತ್ತದೆ ಅವು ಸೇರಿವೆಯೊ ಅಥವಾ ಇಲ್ಲವೋ ಎಂಬುದರ ಮಾಹಿತಿ ನಮಗಿಲ್ಲದಿರುವುದರಿಂದ ಸಧ್ಯಕ್ಕೆ ನಮ್ಮ ಹಾಗೂ ನಮ್ಮಂತೆ ಇರುವ ಇತರೆ ಕೆಲವು.
ಜಾತಿಗಳಿಗೆ ಸಂಬಂದಿಸಿದ ಕೆಲವು ವಿಶಿಷ್ಟ ಮಾಹಿತಿಗಳ ಸಂಗ್ರಹಕ್ಕೆ ಸಮೀಕ್ಷಾ ಅವಕಾಶವಿರಬೇಕು. ಅದಕ್ಕಾಗಿ ಈ ವಿಷಯ/ಅಂಶಗಳನ್ನು ಹೆಚ್ಚುವರಿಯಾಗಿ ಸಮೀಕ್ಷಾ ಸೇರಿಸಲು ಕೋರುತ್ತೇವೆ ಎಂದರು.
ಈ ಸಮೀಕ್ಷೆಗೆ ನೀಡಿರುವ ಸಮಯದ ಅವಧಿಯೊಳಗೆ ಅರೆಕಾಲಿಕ ಉದ್ಯೋಗಕ್ಕಾಗಿ ತಾಂಡಾಗಳಿಂದ ಹೊರಗೆ ಹೋಗಿರುವ ಕುಟುಂಬಗಳ ಜನರು ವಾಪಸಾಗುವುದಿಲ್ಲ ಅವರನ್ನು ಕರೆತರುವುದು ಕಷ್ಟದ ಕೆಲಸ. ಅದಕ್ಕಾಗಿ ಈ ಸಮೀಕ್ಷಾ ಅವಧಿಯನ್ನು ದೀಪಾವಳಿಯವರೆಗೆ ಮುಂದುವರೆಸಲು ಅಥವಾ ಅವರು ಕೆಲಸ ಮಾಡುವ ಸ್ಥಳಗಳಿಗೆ ಸಮೀಕ್ಷಕರನ್ನು ನಿಯೋಜಿಸಿ ಮಾಹಿತಿಗಳನ್ನು ಸಂಗ್ರಹಣೆ ಮಾಡಿಸಲು ಅಥವಾ ಅವರ ಪರವಾಗಿ ಮಾಹಿತಿ ಕೊಡಲು ಬೇರೆಯವರಿಗೆ ಅವಕಾಶ ಕಲ್ಪಿಸುವ ದಿಶೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲು ಕೋರುತ್ತೇವೆ ಎಂದರು.
ಕೇಂದ್ರ ಸರ್ಕಾರ ಜಾತಿಗಣತಿ ಮಾಡಲು ನಿರ್ಧಾರ ಮಾಡಿದ್ದು, ಕೇಂದ್ರ ಸರ್ಕಾರದ ಜಾತಿಗಣತಿಯು ವೈಜ್ಞಾನಿಕವಾಗಿ ಮಾಡುವುದರಿಂದ ಯಾವುದೆ ಸಮುದಾಯಗಳಿಗೂ ಅನ್ಯಾಯ ಆಗುವುದಿಲ್ಲಾ. ಹಾಗಾಗಿ ಪರಿಶಿಷ್ಟ ಜಾತಿಗಳ ಉಪವರ್ಗೀಕರಣಕ್ಕಾಗಿ ಕೈಗೊಳ್ಳುತ್ತಿರುವ ಸಮೀಕ್ಷೆಯ ಪ್ರಮೇಯವೇ ಬರುವುದಿಲ್ಲಾ ಎಂದರು.
ಪರಿಶಿಷ್ಟ ಜಾತಿಗಳ ಉಪವರ್ಗೀಕರಣಕ್ಕಾಗಿ ಕೈಗೊಳ್ಳುತ್ತಿರುವ ಸಮೀಕ್ಷೆಯು ತರಾತುರಿಯಲ್ಲಿ ನಡೆಯುವುದರಿಂದ ಸಮಂಜಸವಾದ ವರದಿ ಬರಲು ಸಾಧ್ಯವಿಲ್ಲಾ ಹಾಗಾಗಿ ಎಲ್ಲಾ ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಎಂದರು.
ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ನಮ್ಮ ಸಮುದಾಯದ ಮುಖಂಡರುಗಳು ಹಲವಾರು ಬಾರಿ ಭೇಟಿ ಮಾಡಿ ಸಭೆ ನಡೆಸಲು ಮನವಿ ಮಾಡಿದರು ಸಭೆ ಮಾಡದೆ ಯಾವುದೋ ಹಿತಾಶಕ್ತಿಗೆ ಮುಣಿದು ಕೇಲವೇ ಸಮುದಾಯಗಳ ಸಭೆ ನಡೆಸಿ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡುತ್ತಾ ಬಂದಿದ್ದಾರೆ ಅವರ ನಡೆ ಖಂಡಿಸಿದರು.
ಪರಿಶಿಷ್ಟ ಜಾತಿಗಳ ಸಮುದಾಯಗಳನ್ನು ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಹಿತಾಸಕ್ತಿಗೆ ಬಳಸಿ ಅವರಿಗೆ ಅನ್ಯಾಯ ಮಾಡುತ್ತಾ ಬಂದಿವೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಾಂತ ಆರ್ .ಅಂಗಡಿ,ಕ್ರಿಷ್ಣಾಜಿ ಚವ್ಹಾಣ,ಡಾ ಹರಿಲಾಲ ಪವಾರ, ಪಾಂಡು ಚವ್ಹಾಣ,ಮಂಗಲಪ್ಪಾ ಲಮಾಣಿ,ಗಂಗಾ ನಾಯಕ,ನಾಗರಾಜ ನಾಯ್ಕ,ಗಂಗಾ ರಾಠೋಡ ಇದ್ದರು.