ಪಿರಮಿಡ್ ಸ್ಪಿರಿಚುವಲ್ ಸೊಸೈಟೀಸ್ ಮೂವ್ಮೆಂಟ್, ಹಾಗೂ ಪತ್ರೀಜಿ ವೆಜಿಟೇರಿಯನ್ ಮೂಮೆಂಟ್, ಕರ್ನಾಟಕ ಅಡಿಯಲ್ಲಿ ಹಮ್ಮಿಕೊಂಡ ಶಾಕಾಹಾರ ಜನಜಾಗೃತಿ ಜಾಥಾ

ಪಿರಮಿಡ್ ಸ್ಪಿರಿಚುವಲ್ ಸೊಸೈಟೀಸ್ ಮೂವ್ಮೆಂಟ್, ಹಾಗೂ ಪತ್ರೀಜಿ ವೆಜಿಟೇರಿಯನ್ ಮೂಮೆಂಟ್, ಕರ್ನಾಟಕ ಅಡಿಯಲ್ಲಿ ಹಮ್ಮಿಕೊಂಡ ಶಾಕಾಹಾರ  ಜನಜಾಗೃತಿ ಜಾಥಾ
 ಕಾರ್ಯಕ್ರಮವನ್ನು ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರು ಸಸಿ ನೆಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ರವರು ಧ್ಯಾನ ಹಾಗೂ
 ಸಸ್ಯಾಹಾರದಿಂದ ಆರೋಗ್ಯ ಹಾಗೂ ಸ್ಮೃತಿ ಶಕ್ತಿ ಸಹ ವೃದ್ಧಿಸುತ್ತದೆ, ಇಂತಹ ಜಾಥಾ ಕಾರ್ಯಕ್ರಮಕ್ಕೆ ಯುವಪೀಳಿಗೆಯ ಸಹಕಾರವೂ ಮುಖ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ  ಅವಳಿನಗರದಲ್ಲಿಯೂ ಸಹ ಪಿರಮಿಡ್
 ಸಂಸ್ಥೆಯನ್ನು ಸ್ಥಾಪಿಸುವ ಕುರಿತು ಕುಲಪತಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಭರವಸೆಯನ್ನು ನೀಡಿದರು. 
ಈ ಸಂದರ್ಭದಲ್ಲಿ ಶ್ರೀ ಡಾ. ಆನಂದ ಪಾಂಡುರಂಗಿ ರವರು, ಶ್ರೀ ದತ್ತಾ ಡೋರ್ಲೆ ರವರು, ಗುರುಮಾತೆ ಸ್ವರ್ಣಮಾಲಾ ಪತ್ರಿ ಅಮ್ಮನವರು, ಶ್ರೀಮತಿ ಸುಮಂಗಳಾ ಸಾಲಿಮಠ ರವರು, ಶ್ರೀಮತಿ ವಿಶಾಲಾಕ್ಷಿ ಆಕಳವಾಡಿ ರವರು, ಹಾಗೂ ಪಿರಮಿಡ್ ಸಂಸ್ಥೆಯ ಪದಾಧಿಕಾರಿಗಳು,  ಸದಸ್ಯರು ಉಪಸ್ಥಿತರಿದ್ದರು
ನವೀನ ಹಳೆಯದು

نموذج الاتصال