DHARWAD:ಕಾಶ್ಮೀರದ ಪಹಲ್ಗಾಂನಲ್ಲಿನ ಭಯೋತ್ಪಾದಕರು ನಡೆಸಿದ ಕುಕೃತ್ಯಕ್ಕೆ ಪ್ರತಿಯಾಗಿ ಭಾರತದ ಸೈನ್ಯ ದಾಳಿ

ಧಾರವಾಡ : ಕಾಶ್ಮೀರದ ಪಹಲ್ಗಾಂನಲ್ಲಿನ ಭಯೋತ್ಪಾದಕರು ನಡೆಸಿದ ಕುಕೃತ್ಯಕ್ಕೆ ಪ್ರತಿಯಾಗಿ ಭಾರತದ ಸೈನ್ಯ ದಾಳಿ
 ನಡೆಸಿರುವುದನ್ನು  ಎಂದು ಕೆಪಿಸಿಸಿ ಸದಸ್ಯ, ನಗರದ ದಲಾಲ ಮತ್ತು ವರ್ತಕರ ಸಂಘದ ಅಧ್ಯಕ್ಷ ಶಿವಶಂರ ಹಂಪಣ್ಣವರ ಸ್ವಾಗತಿಸಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದಿಂದ ಇಂದಿನ ಪಹಲ್ಗಾಂ ಪ್ರಕರಣದವರೆಗೂ ಪಾಕಿಸ್ತಾನ ಪ್ರಚೋದಿತ ಭಯೋತ್ಪಾದಕರು ಭಾರತದ ನಾಗರಿಕರು ಮತ್ತು ಸೈನಕ್ಕೆ ಉಪಟಳ ನೀಡುತ್ತ ಬಂದಿದ್ದಾರೆ.ಆದರೆ, ಭಾರತವು ದ್ವಿಪಕ್ಷೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸಿ ಶಾಂತಿ ಬಯಸಿದರೂ ಪಾಕಿಸ್ತಾನ ತನ್ನ ಮೊಂಡುತನ ಬಿಡದಿರುವುದು ಖಂಡನೀಯ.
ಭಾರತದ ಸಾರ್ವಭೌಮತೆಯನ್ನು ಕೆಣಕುವ ಮಟ್ಟದಲ್ಲಿ ಭಯೋತ್ಪಾದಕರು ತಮ್ಮ ದುಷ್ಟ ಕಾರ್ಯದಲ್ಲಿ ತೊಡಗಿರುವುದನ್ನು ಮೂಲೋತ್ಪಾಟನೆ ಮಾಡುವುದು ಅಗತ್ಯವಿದೆ. ಈ ದಿಸೆಯಲ್ಲಿ ಕೇಂದ್ರ ಸರಕಾರ ದೃಢ ಹೆಜ್ಜೆ ಇಟ್ಟಿರುವುದು ಉತ್ತಮ ನಡೆಯಾಗಿದೆ. ಇತ್ತ ಭಾರತೀಯ ಸೈನ್ಯ ಕೂಡ ಯುದ್ಧ ತಂತ್ರ ರೂಪಿಸಿ ಅನುಷ್ಠಾನಕ್ಕೆ ತರುತ್ತಿರುವುದು ಶ್ಲಾಘನೀಯ. ಈ ಸಂದರ್ಭದಲ್ಲಿ ನಮ್ಮ ಯೋಧರ ಬಗ್ಗೆ ಹೆಮ್ಮೆ ಪಡುವುದರ ಜೊತೆಗೆ ಸೂಕ್ತ ರೀತಿಯಲ್ಲಿ ಎಲ್ಲರೂ ಬೆಂಬಲಿಸಬೇಕಿದೆ.
ಈ ನಿರ್ಣಾಯಕ ಸಂದರ್ಭದಲ್ಲಿ ಸಮಸ್ತ ಭಾರತೀಯರು ಒಕ್ಕೊರಲಿನಿಂದ ಸೈನಿಕರಿಗೆ ಧೈರ್ಯ ತುಂಬುವ ಮತ್ತು ಸುರಕ್ಷಿತ ವಾಪಸ್ಸಿಗೆ ಪ್ರಾರ್ಥಿಸುವ ಕೆಲಸವನ್ನು ಮಾಡಬೇಕಿದೆ ಎಂದು ಹಂಪಣ್ಣವರ ಅಭಿಪ್ರಾಯಪಟ್ಟಿದ್ದಾರೆ.

ನವೀನ ಹಳೆಯದು

نموذج الاتصال