DHARWAD:ವೀರ ಯೋಧರಿಗೆ ಗೌರವ ಸಮರ್ಪಣೆ, ತಿರಂಗಾ ಯಾತ್ರೆ, ಸೈನಿಕರಿಗೆ ಸತ್ಕಾರ

 ವೀರ ಯೋಧರಿಗೆ ಗೌರವ ಸಮರ್ಪಣೆ,  ತಿರಂಗಾ ಯಾತ್ರೆ, ಸೈನಿಕರಿಗೆ ಸತ್ಕಾರ
ಧಾರವಾಡ : ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ರವರ ಮಾರ್ಗದರ್ಶನದಲ್ಲಿ ಮತ್ತು ಅಧ್ಯಕ್ಷೆ ಪೂಜಾ ಸವದತ್ತಿ ರವರ ನೇತೃತ್ವದಲ್ಲಿ ತಿರಂಗಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.  ವಿದ್ಯಾವರ್ಧಕ ಸಂಘ ಧಾರವಾಡ ದಿಂದ ಜೂಬ್ಲೀ ವೃತ್ತದ ವರೆಗೂ ಯಾತ್ರೆ ನಡೆಸಲಾಯಿತು. ನಂತರ ವಿಶ್ವಗುರು ಬಸವೇಶ್ವರರ ಪುತ್ತಳಿಗೆ ಮಾಲಾರ್ಪಣೆ ಮಾಡಿದರು. 
 ಭಾರತೀಯ ಸೇನೆ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಉಗ್ರರನ್ನು ಅವರ ತಾಣಕ್ಕೆ ನುಗ್ಗಿ ಹೊಡೆದುರುಳಿಸಿದರು. ಸೈನಿಕರ ಶೌರ್ಯ ಮೆಚ್ಚಿ ಭಾರತೀಯ ಸೈನಿಕರ ಮನೋಬಲ ಹೆಚ್ಚಿಸುವುದು ಈ ತಿರಂಗಾ ಯಾತ್ರೆಯ ಉದ್ದೇಶವಾಗಿದೆ ಎಂದು ಕಿತ್ತೂರು ಕರ್ನಾಟಕ ಪಂಚ ಸೇನಾ ಮಹಿಳಾ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷೆ  ಪೂಜಾ ಸವದತ್ತಿ ಹೇಳಿದರು.
ನಿವೃತ್ತ ಯೋಧ ಎಂದಿಗೂ ಮಾಜಿಯಾಗುವುದಿಲ್ಲ. ಭಾರತೀಯ ಸೇವೆಯಿಂದ ನಿವೃತ್ತರಾಗಬಹುದು ಆದರೇ ತನ್ನ ಜೀವ ಇರುವರೆಗೂ ಆತನ ದೇಶಭಕ್ತಿ ಮಾಜಿಯಾಗಲು ಬಿಡುವುದಿಲ್ಲ. ಯುದ್ದವಾದರೇ ಮತ್ತೆ ಮರಳಿ ನಾವು ದೇಶಸೇವೆಗೆ ಸಿದ್ಧರಾಗಲೇಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾವು ಸದಾ ದೇಶದ ಸೈನಿಕರೇ ಎಂದು ನಿವೃತ್ತ ಯುವ ಯೋಧ ಬಸವರಾಜ ಬಡಿಗೇರ ಸನ್ಮಾನ ಸ್ವೀಕರಿಸಿ ನುಡಿದರು. ಕಾರ್ಯಕ್ರಮದಲ್ಲಿ 
ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿದ ಮಾಜಿ ಸೈನಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು.  ಪಂಚಾಸೇನಾ ಸಂಘ ಕಿತ್ತೂರು ಕರ್ನಾಟಕ ಮಹಿಳಾ ಘಟಕದ ಎಲ್ಲ ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಸೇನೆಯಲ್ಲಿ ಸೇವೆ ಸಲ್ಲಿಸಿದ ಪ್ರತಿಯೊಬ್ಬ ಸೈನಿಕರ ಹಿಂದೆ ಒಂದೊಂದು ವಿಭಿನ್ನ ರೀತಿಯ ಸಾಹಸಮಯ ಕಥೆಗಳಿವೆ. ಸೈನಿಕರ ಜೀವನ ಕಷ್ಟಕರ ಮತ್ತು ಸಾಹಸಮಯ ವಾಗಿರುತ್ತದೆ ಸಾಕಷ್ಟು ಕಷ್ಟಗಳನ್ನು ಅನುಭವಿಸಿ, ಕುಟುಂಬದ ಯಾವ ಸಮಸ್ಸೆಗಳನ್ನು ಲೆಕ್ಕಿಸದೆ ಗಡಿ ರಕ್ಷಣೆಯಲ್ಲಿ ನಿರತರಾಗಿರುತ್ತಾರೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು. ಮತ್ತು ಮಾಜಿ ಸೈನಿಕರ ನಿವೃತ್ತಿ ಜೀವನದಲ್ಲಿ ಇರುವಂತ ಕೆಲವು ಕುಂದುಕೊರತೆಗಳ ಬಗ್ಗೆ ರಾಜ್ಯ ಸರಕಾರಗಳು ಗಮನಹರಿಸಬೇಕು, ಅಧಿವೇಶನದಲ್ಲಿ ಮಾನ್ಯ ಕಂದಾಯ ಸಚಿವರಾದ ಕೃಷ್ಣ ಬೈರೆಗೌಡರು ಹೇಳಿದಂತೆ ಮಾಜಿ ಸೈನಿಕರಿಗೆ ನಿವೇಶನ ನೀಡವ ವಿಚಾರವನ್ನು ಅತೀ ಶೀಘ್ರದಲ್ಲಿ ಕೈಗೊಳ್ಳಬೇಕೆಂದು ಅಭಿಪ್ರಾಯ  ಪಟ್ಟರು. 
ಇನ್ನೊರ್ವ ಮಾಜಿ ಸೈನಿಕ  ವೀರೇಶ ಹಟ್ಟಿಹೋಳಿ ಅವರು  ಮಾತನಾಡಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು. ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಮೊದಲ ಬಾರಿಗೆ ಧಾರವಾಡ ಜಿಲ್ಲೆಯಲ್ಲಿ ಹಮ್ಮಿಕೊಂಡ ಶ್ರೇಯಸು ಪಂಚ ಸೇನಾ ಮಹಿಳಾ ಘಟಕಕ್ಕೆ ಸಲುತ್ತದೆ ಎಂದು ಸೈನಿಕರು ಶ್ಲಾಘಿಸಿದರು.ಈ ಕಾರ್ಯಕ್ರಮದಲ್ಲಿ ಮಂಜುಳಾ ಕುಶಪ್ಪನವರ್  ವಿಜಯಲಕ್ಷ್ಮಿ ಕಿತ್ತೂರ್. ರೇಖಾ ಕಜ್ಜೇರ್ ವಸಂತ ಬಿಷ್ಟನ್ನವರ. ಶಕುಂತಲಾ. ಮಹಾದೇವಿ ಡಿಎಚ್.  ನೀಲವ್ವ ಅಂಗಡಿ. ಮಾಜಿ ಪಾಲಿಕೆ ಸದಸ್ಯರು ಮೋಹನ  ಹಿರೇಮನಿ. ಜೋಶಿ  ಶಶಿಧರ್ ಕಡ್ಲೂರು. ಬಸವರಾಜ್ ರುದ್ರಾಪುರ್ ಅಶೋಕ್ ಶೆಟ್ಟರ್, ಹಿರಿಯ ಸಂಪಾದಕರಾದ ಬಸವರಾಜ ಆನೆಗುಂದಿ,  ರಮಾನಂದ ಕಮ್ಮಾರ್ ಸುಧಾ ಕಬ್ಬೂರ್. ಹಾಗೂ ದೇಶ ಪ್ರೇಮಿಗಳಿಗೆ ಭಾಗವಹಿಸಿದ್ದರು.

 
ನವೀನ ಹಳೆಯದು

نموذج الاتصال