ಸಾಹಿತಿ ಕಂಬಾರಗೆ ಅರಿವೇ ಗುರು " ಪ್ರಶಸ್ತಿ ಪ್ರದಾನ
ಧಾರವಾಡ:-- ಕರ್ನಾಟಕ ವಿಶ್ವವಿದ್ಯಾಲಯ ಕೊಡಮಾಡುವ " ಅರಿವೇ ಗುರು " ಪ್ರಶಸ್ತಿಯನ್ನು ಸಾಹಿತಿ ಚಂದ್ರಶೇಖರ ಕಂಬಾರ ಅವರಿಗೆ ಬೆಂಗಳೂರಿನ ಅವರ ಸ್ವಗೃಹದಲ್ಲಿ ಪ್ರದಾನಮಾಡಲಾಯಿತು.
ಕರ್ನಾಟಕ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿಗಳಾದ ಶ್ರೀಮತಿ ಜಯಶ್ರೀ. ಶಿವಾನಂದ, ಕುಲಸಚಿವರಾದ ಎ. ಚೆನ್ನಪ್ಪ, ಕುಲಸಚಿವರು ಪರೀಕ್ಷಾ ವಿಭಾಗ ಪ್ರೊ. ವೈ. ಮಟ್ಟಿಹಾಳ್, ಕಡ್ಕೊಳ, ಸಿದ್ದಪ್ಪಾ, ಸಿಂಡಿಕೇಟ್ ಸದಸ್ಯರಾದ ಶ್ಯಾಮ ಮಲ್ಲನಗೌಡರ, ಬಸವರಾಜ ಗೊರವರ ಹಾಗೂ ಮಹೇಶ ಹುಲೆಯನ್ನವರ ಉಪಸ್ಥಿತರಿದ್ದರು.