*ಮುಸ್ಲಿಂ ಸಮುದಾಯವು ಶೈಕ್ಷಣಿಕವಾಗಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಹಿಂದುಳಿದಿದ್ದು ಪ್ರಗತಿ ಹೊಂದಲು ಶೈಕ್ಷಣಿಕ ಜಾಗೃತಿಯೊಂದೇ ಪರಿಹಾರ ಮತ್ತು ಸಮುದಾಯಕ್ಕೆ ನೌಕರರ ಕೊಡುಗೆ ಅವಶ್ಯಕ ಎಂದು ವೈಶುದೀಪ ಪೌಂಡೇಶನ್ ದ ಅಧ್ಯಕ್ಷರಾದ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ

*ಶೈಕ್ಷಣಿಕ ಪ್ರಗತಿಯೊಂದೇ ಸಮುದಾಯದ ಉನ್ನತಿಗೆ ಕಾರಣ*
*ಮುಸ್ಲಿಂ ಸಮುದಾಯವು ಶೈಕ್ಷಣಿಕವಾಗಿ ಮತ್ತು ವಿವಿಧ  ಕ್ಷೇತ್ರಗಳಲ್ಲಿ  ಹಿಂದುಳಿದಿದ್ದು ಪ್ರಗತಿ ಹೊಂದಲು ಶೈಕ್ಷಣಿಕ ಜಾಗೃತಿಯೊಂದೇ ಪರಿಹಾರ ಮತ್ತು
 ಸಮುದಾಯಕ್ಕೆ ನೌಕರರ ಕೊಡುಗೆ ಅವಶ್ಯಕ ಎಂದು ವೈಶುದೀಪ ಪೌಂಡೇಶನ್ ದ ಅಧ್ಯಕ್ಷರಾದ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು*
*ಧಾರವಾಡದ ನೌಕರರ ಭವನದಲ್ಲಿ ನಡೆದ ಮುಸ್ಲಿಂ ಮುಖಂಡರಿಗೆ ಒಂದು ದಿನದ ಕಾರ್ಯಾಗಾರ ಹಾಗೂ ಪ್ರತಿಭಾನ್ವಿತ ಮಕ್ಕಳಿಗೆ  ಪ್ರತಿಭಾ ಪುರಸ್ಕಾರ ಹಾಗೂ ವಿಶೇಷ ಸಾಧಕರಿಗೆ& ಗರಿಷ್ಠ ದಾಖಲಾತಿ ಹೊಂದಿದ ಶಾಲೆಗಳಿಗೆ ಸನ್ಮಾನ ಸಮಾರಂಭದಲ್ಲಿ 124 ವಿದ್ಯಾರ್ಥಿಗಳಿಗೆ ಸನ್ಮಾನ, 20 ಶಾಲೆಗಳಿಗೆ ಪ್ರಶಸ್ತಿ ಮತ್ತು 17 ಜನ ವಿಶೇಷ ಸಾಧಕರಿಗೆ ಪುರಸ್ಕರಿಸಲಾಯಿತು*
*ಮುಖ್ಯ ಅತಿಥಿಗಳಾದ AIPTF ಕಾರ್ಯಾಧ್ಯಕ್ಷರಾದ ಶ್ರೀ ಬಸವರಾಜ ಗುರಿಕಾರ ರವರು ಮಾತನಾಡಿ ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ನೌಕರರ ಮತ್ತು ಶಿಕ್ಷಕರ ಸಂಘಟನೆಗಳಲ್ಲಿ  ಮುಸ್ಲಿಂ ಸಮುದಾಯಕ್ಕೆ  ಆದ್ಯತೆಯನ್ನು ನೀಡಬೇಕು. ಒಗ್ಗಟ್ಟಾಗಿ ಮುಂದುವರೆಯಿರಿ &  ಸಂಘದ ಚಟುವಟಿಕೆಗಳಿಗೆ ಸದಾ ಬೆಂಬಲ‌ ಇರುತ್ತೆ  ತಿಳಿಸಿದರು*
*ಕರ್ನಾಟಕ ರಾಜ್ಯ ಸರಕಾರಿ ನೌಕರರ  ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಎಸ್ ಎಫ್ ಸಿದ್ಧನಗೌಡ್ರ ಅವರು ಮಾತನಾಡಿ ಈ ಸಂಘವು ಕ್ರಿಯಾಶೀಲವಾಗಿ ಸೇವೆ ಸಲ್ಲಿಸುತ್ತಿದ್ದು  ತನ್ನ ಕಾರ್ಯಗಳ ಮೂಲಕ ಸದಸ್ಯರ ಮನಗೆದ್ದಿದೆ ಎಂದರು*
*ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಜನಾಬ ಮಹಮದ್ ಸಲೀಮ್ ಹಂಚಿನಮನಿಯವರು  ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಮುದಾಯಕ್ಕೆ ನಾವು ನಮ್ಮ ಕೊಡುಗೆಯನ್ನು ನೀಡುತ್ತಾ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿಗಾಗಿ  ಸಂಘದ ಸ್ಥಾಪನೆಯಾಗಿದೆ ಎಂದರು*
*ಜನಾಬ ಅಬ್ದುಲ್  ಮೆಣಸಗಿ ಯವರು ನೌಕರರು/ಶಿಕ್ಷಕರ ವಿವಿಧ ಬೇಡಿಕೆಗಳನ್ನು ಮಂಡಿಸಿ  ಈಡೇರಿಸಲು ಒತ್ತಾಯಿಸಿದರು*
*ಜಿಲ್ಲಾಧ್ಯಕ್ಷರಾದ ಶ್ರೀ ಆರ್ ಎಂ ದಫೇದಾರರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ  ನೌಕರರ ಹಿತ ಕಾಪಾಡುವುದರ ಜೊತೆಗೆ ಸಮುದಾಯಕ್ಕೆ  ಶೈಕ್ಷಣಿಕ ಮಹತ್ವವನ್ನು ತಿಳಿಸುವ ಕಾರ್ಯ ಮಾಡುತ್ತಾ ಸಮುದಾಯದ ಪ್ರತಿಭೆಗಳನ್ನು ಇಂತಹ ಕಾರ್ಯಕ್ರಮದ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ ಎಂದರು* 
*ಮುಸ್ಲಿಮ್ ಸಮುದಾಯಕ್ಕೆ ಸರಕಾರದಿಂದ ದೊರೆಯುವ  ಸೌಲಭ್ಯಗಳ ಕುರಿತು ವಿವಿಧ ಇಲಾಖೆಗಳ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕಾರ್ಯಾಗಾರ ನಡೆಸಲಾಯಿತು*
*ಈ ಸಮಾರಂಭದಲ್ಲಿ  ಶ್ರೀ ದೇವಿದಾಸ್ ಶಾಂತಿಕರ ,ಶ್ರೀ ಎಂ ಯು ಶಿರಹಟ್ಟಿ,  ಶ್ರೀ ಎಸ್ ಎಂ ಹುಡೇದಮನಿ, ಶ್ರೀ ಅಕ್ಬರ್ ಅಲಿ ಖಾಜಿ, ಶ್ರೀಮತಿ ಫರೀದಾ ನದಾಫ್, ಶ್ರೀಪೀರವಾಲೆ, ಶ್ರೀ ಶಾನವಾಜ್ ಪಠಾಣ್,  ಶ್ರೀಮತಿ ಸಲೀಮಾಬಿ ಕೋಳೂರ,  ಶ್ರೀಮತಿ ನಫೀಸಾ ದಾವಲಸಾಬನವರ,ಶ್ರೀಮತಿ ಫರ್ಹಾತ್ ಜಲಗೇರಿ, ಶ್ರೀ ಜುಬೇರ್ ಖಂಡುನಾಯ್ಕ್,ಎ ಎ ಚಕೋಲಿ, ಎ ಕೆ ಮುಜಾವರ,ಎನ್ ಆರ್ ಪಟೇಲ್, ಸಂಗ್ರೇಶಕೊಪ್ಪ,ಅಕ್ಬರ್, ಎ ಆರ್ ಅಕ್ಕಿ,ಜಿಮಖಾನೆ, ನಸ್ರೀನ್ ಪಾಚಾಪುರ,ಜಾವೇದ್,ಶ್ರೀಮತಿ ಅಬಿದಾ ಮುಲ್ಲಾ,ಅಬುತಾಹೀರ್ ಮುಲ್ಲಾ,ಜಾವೇದ್ ಖತೀಬ್ ಅವರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು*
*ಪ್ರಧಾನ ಕಾರ್ಯದರ್ಶಿ ಎಂ ಕೆ ಘೋಡೆಸವಾರ ಅವರು ಸ್ವಾಗತಿಸಿದರು‌. ಜನಾಬ್ ಕೆ ಎಂ ಶೇಖ್ ಕಾರ್ಯಕ್ರಮ ನಿರೂಪಿಸಿದರು,  ಖಜಾಂಚಿ ಜನಾಬ್ ಪಿ ಎಫ್ ಗುಡೇನಕಟ್ಟಿ ವಂದಿಸಿದರು*
ನವೀನ ಹಳೆಯದು

نموذج الاتصال