*ಬಣಜಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ*
_ಸಮಾಜದ ಕುಟುಂಬಗಳ ಸರ್ವೇಯಾಗಲಿ: ಜಗದೀಶ ಶೆಟ್ಟರ_
ಧಾರವಾಡ: ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಧಾರವಾಡ ತಾಲೂಕ ಘಟಕದ ವತಿಯಿಂದ ರವಿವಾರ ಎಸ್ಎಸ್ಎಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ, ಲಿಂಗಧಾರಣೆ, ಸಹಜ ಶಿವಯೋಗ ಕಾರ್ಯಕ್ರಮ ಲಿಂಗಾಯತ ಭವನದಲ್ಲಿ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ, ವಿಧಾನಪರಿಷತ್ ಸದಸ್ಯ ಜಗದೀಶ ಶೆಟ್ಟರವರು ಸಮಾಜದ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು. ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುವಂತಾಗಬೇಕು. ೧೨ನೇ ಶತಮಾನದಲ್ಲಿ ಎಲ್ಲ ವರ್ಗದ ಜನರನ್ನು ಒಂದುಗೂಡಿಸುವ ಕೆಲಸವನ್ನು ಬಸವಣ್ಣನವರ ಮಾಡಿದ್ದಾರೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ನಡೆಯೋಣ ಎಂದು ಆಶಯ ವ್ಯಕ್ತಪಡಿಸಿದರು.
ಎಲ್ಲಾ ಕ್ಷೇತ್ರದಲ್ಲಿಯೂ ಸಮಾಜದ ಬಾಂಧವರು ಮುಂಚೂಣಿಯಲ್ಲಿದ್ದಾರೆ. ಸಮಾಜದ ಕುಟುಂಬಗಳ ಸ್ಥಿತಿಗತಿ ಬಗ್ಗೆ ಸಮೀಕ್ಷೆಯಾಗುವ ಕೆಲಸವಾಗಬೇಕಾಗಿದೆ. ಯಾವ ಪರಿಸ್ಥಿತಿಯಲ್ಲಿ ಕುಟುಂಬಗಳು ಇವೆ ಎನ್ನುವುದರ ಮೇಲೆ ಸಹಾಯ ಮಾಡಿ ಮುಖ್ಯ ವಾಹಿನಿಗೆ ತರುವ ಕೆಲಸವಾಗಬೇಕು. ಈ ಉತ್ತಮ ಕೆಲಸವನ್ನು ಮಸ್ಕಿಯಲ್ಲಿ ಈಗಾಗಲೇ ಸಮಾಜದವರು ಮಾಡುತ್ತಿದ್ದಾರೆ. ಇದು ರಾಜ್ಯಾದ್ಯಂತ ನಡೆಯುವಂತಾಗಬೇಕು ಎಂದು ಹೇಳಿದರು.
ಬೆಳಿಗ್ಗೆ ಸಮಾಜದ ಬಸವಂತಪ್ಪ ತೋಟದ ಮತ್ತು ಶಿವಣ್ಣ ಶರಣ್ಣವರ ಲಿಂಗಧಾರಣೆ, ಸಹಜ ಶಿವಯೋಗ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದಂತಹ ಸಾಧಕರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ತಾಲೂಕಾ ಘಟಕದ ಅಧ್ಯಕ್ಷ ಅರುಣಕುಮಾರ ಶೀಲವಂತ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ವೀರಣ್ಣ ಮತ್ತಿಕಟ್ಟಿ, ಮಾಜಿ ಶಾಸಕಿ ಸೀಮಾ ಮಸೂತಿ, ಶರಣಪ್ಪ ಮತ್ತಿಕಟ್ಟಿ, ಡಾ. ಲಿಂಗರಾಜ ಅಂಗಡಿ, ಡಾ. ವೀರಣ್ಣ ರಾಜೂರ, ಮಲ್ಲಿಕಾರ್ಜುನ ಸಾವಕಾರ, ಶೇಖರ ಕವಳಿ, ವ್ವಿ.ಸಿ. ಸವಡಿ, ಡಾ. ಸುಧೀರ ಜಂಬಗಿ, ವೀರಣ್ಣ ಮಳಗಿ, ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ್ ಸೇರಿದಂತೆ ಅನೇಕ ಗಣ್ಯರು ಸಾಕ್ಷಿಯಾದರು.
ಸಂಘದ ಖಜಾಂಚಿ ಮಹಾಂತೇಶ ಗುಂಜೆಟ್ಟಿ ಸ್ವಾಗತಿಸಿದರು, ಕುಮಾರಿ ಬಸವರಾಜೇಶ್ವರಿ ಕೆಂಗಲ ಕಾರ್ಯಕ್ರಮ ನಿರೂಪಣೆ ಮಾಡಿದರು, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕುಂಬಾರಿ ವಂದನಾರ್ಪಣೆ ಮಾಡಿದರು, ಸಮಾರಂಭದಲ್ಲಿ ರವಿ ಕಪಲಿ, ಸಂತೋಷ ಪಟ್ಟಣಶೆಟ್ಟಿ, ಸಂಜಯ್ ತುರಮರಿ, ಮಹೇಶ ಬಿಲೆಹಾಲ, ಮೃತ್ಯುಂಜಯ ಕರಡಿಗುಡ್ಡ, ಶಿವಕುಮಾರ ಗಾ0ಜಿ, ಅಶೋಕ ಕೌಜಗೇರಿ, ಶರಣಬಸಪ್ಪ ಸವಡಿ ಮತ್ತಿತ್ತರರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891.